Sad Story of Pavitra P. Belchada – Courtesy : Udayvani
Story of Pavitra Poovappa Belchada – Courtesy : Udayvani
ನರಕ ಯಾತನೆಯಿಂದ ಈ ಬಾಲೆಗೆ ಮುಕ್ತಿ ಕೊಡಿ: ನೆರವಾಗುವಿರಾ ಸಹೃದಯಿಗಳೇ ? |
ನರಕ ಯಾತನೆಯಿಂದ ಈ ಬಾಲೆಗೆ ಮುಕ್ತಿ ಕೊಡಿ
ನೆರವಾಗುವಿರಾ ಸಹೃದಯಿಗಳೇ ?
ಮಂಜೇಶ್ವರ,ಜು.27:ಯೌವ್ವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದ ಹುಡುಗಿಯೋರ್ವಳ ದಾರುಣ ಕಥೆಯಿದು.ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿ,ಉನ್ನತ ವಿದ್ಯಾಭ್ಯಾಸಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗಲೇ ತನ್ನ ಶಿರದಲ್ಲಿ ದಿಡೀರನೆ ಉದ್ಭವಿಸಿದ ಗಡ್ಡೆಯೊಂದು ಆಕೆಯ ಬಾಳನ್ನೇ ಕಸಿದುಕೊಂಡಿದೆ.ವಿಧಿಯ ವಿಪರ್ಯಾಸವೆಂಬಂತೆ ಇದೀಗ ಅ ಹುಡುಗಿ ನರಕ ಸದೃಶ ಜೀವನವನ್ನು ಸಾಗಿಸುತ್ತಿದ್ದಾಳೆ.
ಮಂಜೇಶ್ವರ ಸಮೀಪದ ವರ್ಕಾಡಿ ಪಂಚಾಯತಿನ ಕೆದುಂಬಾಡಿ ನಿವಾಸಿ,ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಪೂವಪ್ಪ ಬೆಳ್ಚಪಾಡ-ಚಂದ್ರಾವತಿ ದಂಪತಿಯ ಪುತ್ರಿ ಪವಿತ್ರಾ(16) ಇಂದು ತನ್ನ ಶಿರದ ಮೇಲಿನ ಬೃಹದಾಕಾರದ ಗೆಡ್ಡೆಯ ಭಾರವನ್ನು ಹೊರಲಾಗದೆ ಚಡಪಡಿಸುತ್ತಿದ್ದಾಳೆ.
ಕುಂಜತ್ತೂರಿನ ಸರಕಾರಿ ಹೈಯ್ಯರ್ ಸೆಕೆಂಡರಿ ಶಾಲೆಯಲ್ಲಿ ಕಲಿಯುತ್ತಿದ್ದ ಸಂಧರ್ಭದಲ್ಲಿ ಪವಿತ್ರಾ ಕಲಿಕೆಯಲ್ಲೂ ಮುಂದಿದ್ದಳು.ಒಮ್ಮೆ ತನ್ನ ತಲೆಯಲ್ಲೊಂದು ಹುಬ್ಬು ಕಾಣಿಸಿಕೊಂಡಿದ್ದು, ಅದು ದಿನೇ ದಿನೇ ಬೆಳೆಯತೊಡಗಿದಾಗ ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದರು.ಕ್ರಮೇಣ ಅದು ದಿನೇ ದಿನೇ ಬೆಳೆಯತೊಡಗಿತು.
ತಂದೆ ತಾಯಿ ಅದೆಷ್ಟೋ ಚಿಕಿತ್ಸೆಯನ್ನು ಮಾಡಿದರೂ ಫಲಕಾರಿಯಾಗಲಿಲ್ಲ.ಕಿತ್ತು ತಿನ್ನುವ ಬಡತನ ಮಧ್ಯೆ ತಮ್ಮ ಮಗಳು ಗುಣಮುಖಳಾಗಬೇಕೆಂಬ ಹಂಬಲಿಕೆಯಿಂದ ಪುತ್ರಿಯ ಚಿಕಿತ್ಸೆಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟರು.ಕಳೆದ ಡಿಸೆಂಬರ್ ನಲ್ಲಿ ಪವಿತ್ರಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅ ಬಳಿಕ ಎಂದಿನಂತೆ ಪವಿತ್ರಾ ಗುಣಮುಖಲೂ ಆದಳು. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನೂ ಬರೆದಳು.
ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲು ಸೂಚನೆಯನ್ನಿತ್ತಿದ್ದರೂ ಕಿತ್ತು ತಿನ್ನುವ ಬಡತನ ಅಡ್ಡಿ ಬಂತು.ಈಗಾಗಲೇ ಮಾಡಿದ ಚಿಕಿತ್ಸೆಯ ಸಾಲವನ್ನು ಭರಿಸಲಾಗದೆ ಪಿಯುಸಿ ಕಲಿಯುತ್ತಿರುವ ಇನ್ನೋರ್ವ ಪುತ್ರನೂ ವ್ಯಾಸಂಗವನ್ನು ಮೊಟಕುಗೊಳಿಸಿ ತಂದೆಯ ಜೊತೆ ಕೂಲಿ ಕೆಲಸಕ್ಕೆ ಹೋಗ ತೊಡಗಿದನು.
ಶಸ್ತ್ರಕ್ರಿಯೆಯ ಬಳಿಕ ತಕ್ಕ ಮಟ್ಟಿಗೆ ಪವಿತ್ರಾ ಸುಧಾರಿಸಿಕೊಂಡಿದ್ದರೂ,ಸ್ವಲ್ಪ ಸಮಯದ ಬಳಿಕ ತಲೆಯ ಹಿಂಭಾಗದಿಂದ ಗೆಡ್ಡೆ ಮತ್ತೆ ಸೃಷ್ಟಿಗೊಂದು ಬೆಳೆಯತೊಡಗಿತು.ಕಾಲ ಕಳೆದಂತೆ ಗೆಡ್ಡೆಯ ಗಾತ್ರ ಹಿರಿದಾಗುತ್ತಲೇ ಹೋಯಿತು.ತಮ್ಮ ಕಣ್ಮುಂದೆಯೇ ತಮ್ಮ ಪುತ್ರಿಯ ತಲೆಯಲ್ಲಿ ಗೆಡ್ಡೆಯೂ ಬೆಳೆಯತೊಡಗಿ ರಕ್ತ ಸ್ರಾವಗೊಳ್ಳತೊಡಗಿದಾಗ ತಂದೆ, ತಾಯಿ ಕಂಗಾಲಾದರು.ನಾಗದೋಷ, ಗ್ರಹದೋಷದಿಂದ ಹೀಗಾಗಿದೆಯೆಂದು ಯಾರೋ ಹೇಳಿ ಸ್ವಲ್ಪ ಕಾಲ ಅದರ ಹಿಂದೆ ತೆರಳಿ ಬಳಿಕ ಅದರಲ್ಲಿಯೂ ಫಲಶ್ರುತಿ ಕಾಣದೆ,ಬೆಂಗಳೂರಿಗೆ ಕೊಂಡೊಯ್ಯಲು ದುಡ್ಡಿಲ್ಲದೆ ಈ ಕುಟುಂಬ ಇದೀಗ ಪರಿತಪಿಸತೊಡಗಿದೆ.ತಲೆಯ ಮೇಲಿನ ಗೆಡ್ಡೆಯ ಭಾರ ಹೊರಲಾಗದೆ,ಅಪಾರ ನೋವನ್ನು ಹಿಸಲಾಗದೆ, ಪವಿತ್ರಾ ಮೌನ ಯಾತನೆ ಅನುಭವಿಸುತ್ತಿದ್ದಾಳೆ.
ನೋವನ್ನು ಸಹಿಸಲಾಗುತ್ತಿಲ್ಲ, ತಲೆಯನ್ನು ಮೇಲೆತ್ತಲಾಗುತ್ತಿಲ್ಲ ಎಂದು ಗೋಡೆಗೆ ಒರಗಿಕೊಂಡು ಪವಿತ್ರಾ ಖುದ್ದಾಗಿ ಹೇಳುತ್ತಿದ್ದಾಳೆ. ಬದುಕಿನ ಬಗ್ಗೆ ಅಗಾಧವಾದ ಕನಸನ್ನು ಹೊಂದಿದ್ದ ಆ ಬಾಲೆ, ಇದೀಗ ಗುಡಿಸಲಿನಂತಿರುವ ಪುಟ್ಟ ಸೂರಿನೊಳಗೆ ಎದ್ದು ನಿಲ್ಲಲಾಗದೆ,ಕೂರಲಾಗದೆ,ಮಲಗಿ ನಿದ್ರಿಸಲಾಗದೆ,ನರಕಯಾತನೆಯನ್ನು ಅನುಭವಿಸುತ್ತಿದ್ದಾಳೆ. ಪವಿತ್ರಾಳ ದಯನೀಯ ಸ್ಥಿತಿಯನ್ನು ಕಂಡರೆ ಎಂತಹ ಹೃದಯವೂ ಮರುಗಬಹುದು.ಏನೊಂದೂ ಅರಿಯದ ಆ ಮುಗ್ದ ಹುಡುಗಿಯ ದಾರುಣ ಕಥೆ ದಿನ ಕಳೆದಂತೆ ಭಯಾನಕವಾಗುತ್ತಿದೆ.
“ಸರ್ಕೋಮ ಸ್ಕಲ್” ಎಂಬ ಅಪರೂಪದ ಮೆದುಳಿನ ಕ್ಯಾನ್ಸರ್ ಇದಾಗಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡದಿದ್ದರೆ ಇದು ಅಪಾಯಕಾರಿಯೆಂದು ಪವಿತ್ರಾಳಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.ಒಂದು ಹೊತ್ತಿನ ತುತ್ತಿಗೂ ಪರಿತಪಿಸುವ ಈ ಬಡ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸುವುದು ಕನಸಿನ ಮಾತು.
ನೆರವಾಗುವಿರಾ?
ಪವಿತ್ರಾಳಿಗೆ ಈ ಯಾತನಾ ಲೋಕದಿಂದ ಮುಕ್ತಿ ದೊರೆಯಬೇಕಾದರೆ ಸಹೃದಯರ ನೆರವು ಅತ್ಯಗತ್ಯ.ಹೃದಯವಂತ ದಾನಿಗಳು,ಸಂಘ ಸಂಸ್ಥೆಗಳು ಸ್ಪಂದಿಸಿ ನೆರವಾದರೆ ಪವಿತ್ರಾಳು ಸ್ವಲ್ಪ ಮಟ್ಟಿಗೆ ಪುನಶ್ಚೇತನಗೊಳ್ಳುವುದರಲ್ಲಿ ಸಂದೇಹವಿಲ್ಲ.
ನೆರವಾಗುವವರು. ಚಂದ್ರಾವತಿ, w / ೦ ಪೂವಪ್ಪ ಬೆಳ್ಚಪಾಡ, ಕೆದುಂಬಾಡಿ ಮನೆ, ಅಂಚೆ ಪಾವೂರು,ಮಂಜೇಶ್ವರ, ಕಾಸರಗೋಡು ಜಿಲ್ಲೆ,ಕೇರಳ :671323
(ಅಕೌಂಟ್ ನಂಬ್ರ 90007664283 , ನಾರ್ತ್ ಮಲಬಾರ್ ಬ್ಯಾಂಕ್, ಪಾವೂರ್ ಬ್ರಾಂಚ್ ) ಈ ವಿಳಾಸಕ್ಕೆ ನೆರವನ್ನು ಕಳಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ : 09447287098
———————————————————————————————————————————————————–
After reading this sad news in Thiya Welfare and Udayavani our great Thiya Personality Shri. Krishna Uchil stepped forward to save the precious life of Miss Pavitra Balchada by donating Rs.50,000 to her maternal uncle in the presence of a large Thiya gathering (appox.1200 Thiya members crowd) at Mangalore witnessing the 25th Death Anniversary of the great Thiya leader Shri. Narayana Karthappa on 5th August 2012.
Posted on July 27, 2012, in Uncategorized. Bookmark the permalink. 2 Comments.
Thanks to the continuing support of Thiya Samaj, Dubai members from Dubai, Sharjah, Abudhabi, Ajman.
Thanks, once again to the continuing support of Thiya Samaj, Dubai members from Dubai, Sharjah, Abudhabi, Ajman. Expecting the same support from our people all over India and abroad. The new account details are,
Chandravathi W/o. Poovappa Belchada,
Kedumbady, Pavoor..A/C No.42282200069753 Syndicate Bank Vorkady Branch.(Code SYNB 0004228)
Manjeshwar, Kasargod Dist. Kerala